ಪುಟಗಳು

ಶನಿವಾರ, ಮಾರ್ಚ್ 2, 2013

ರಾಧೆಯ ಕೂಗು



ಕಣ್ಣ ಮುಚ್ಚಿ ತೆರೆದಾಗ ಕಾಣದ ನಿನ್ನ ವದನ
ಹಾಗೆಯೇ  ಕಂಬನಿ ಕಣ್ಣ ರೆಪ್ಪೆಗಳ ಮಿಲನ 
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ನಿನ್ನ ನೆನಪುಗಳ ನನ್  ಹಣೆಗೆ ಚುಂಬಿಸಿ
ಮನದಾಳದಲಿ ಅಲೆಗಳನ್ನೆಬ್ಬಿಸಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥ 

ಪ್ರೇಮ ರಾಗವನು ಸಂಗಡ ಹಾಡಿ 
ಆ ಸಂಜೆ ಏಕಾಂತದಲಿ ಏಕಾಂಗಿ ಮಾಡಿ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಪ್ರೇಮದಂಬರದಲಿ ಸೂರ್ಯನಂತೆ ಮೆರೆದು
ಮೆಲ್ಲನೆ ಮೋಡದ ಮರೆಯಲಿ ಸರಿದು
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥

ಲೋಕವೇ ನೀನೆಂದವಳನು ತಿರಸ್ಕರಿಸುತ
ಲೋಕೊದ್ಧಾರದ ಮನವಿಯನು ಪುರಸ್ಕರಿಸುತ
ತೊರೆದು ಹೋದೆ ಏಕೆ ಬೃಂದಾವನ
ತೊರೆಯದೆ ನಿನ್ನೀ ರಾಧೆಯ ಮನ॥
---
ಗುರುರಾಜ
(ಎಚ್  ಎಸ್  ವೆಂಕಟೇಶ್ ಮೂರ್ತಿ ಯವರ ಲೋಕದ ಕಣ್ಣಿಗೆ ರಾಧೆಯು ಕೂಡ ಹಾಡಿನಿಂದ ಸ್ಪೂರ್ತಿ ಪಡೆದು ಬರೆದ ಪದ್ಯ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ