ಹೀಗೆ ಹೊರಟೆ ನಾ ದೂರದೂರಿಗೆ
ಏರಿ ನಮ್ಮ ಮೆಚ್ಚಿನ ಕರ್ನಾಟಕ ಸಾರಿಗೆ ।
ಮೇಲೆ ಇಟ್ಟು ನನ್ನ ಲಗೇಜು ಕುಳಿತೆ ಕಿಟಿಕಿಯ ಪಕ್ಕ
ಒಂದಿಷ್ಟು ಪ್ರಕೃತಿಯ ಸವಿಯುವುದು ನನ್ನ ಲೆಕ್ಕ ।।
ಲೆಕ್ಕಾಚಾರದ ನಡುವೆ ಪ್ರತ್ಯಕ್ಷಳಾದಳು ಒಬ್ಬಳು ಚೆಲುವೆ
ಕೇಳಿದಳು "ಐದನೇ ನಂಬರಿನ ಸೀಟು ಇದುವೇ?"।
ನಾನೋ ಮೊದಲೇ ಗಾಬರಿಯ ಮನುಷ್ಯ
ಯಾವುದೋ ಯೋಚನೆಯಲಿ ನುಡಿದೆ "ಹೌದು ಶಿಷ್ಯ"।।
ಅವಳು ಬೇರೆ ಹುಡುಗಿಯರ ಹಾಗೆ ಕೋಪಗೊಳ್ಳಲಿಲ್ಲ
ಸುಮ್ಮನೆ ಹಾಗೆ ನನ್ನ ಕಡೆ ನೋಡಿ ಗೀರಿದಳು ಹಲ್ಲ ।
ಕಣ್ಣ ಮುಂದಿದ್ದ ಮುಂಗುರಳ ಸರಿಸಿ ಕುಳಿತಳು ನನ್ನ ಬಗಲಿಗೆ
ಯಾರೋ ಕೂಗಿದ ಹಾಗೆ ಭ್ರಮೆ "ಲಡ್ಡೂ ಬಿತ್ತ ನಿನ್ನ ಬಾಯಿಗೆ"।।
ಶುರುವಾಯಿತು ಕೊನೆಗೂ ನಮ್ಮ ಪಯಣ
ಅಕ್ಕಪಕ್ಕದ ಸೀಟಿನಲ್ಲಿ ಒಂಟಿ ತರುಣಿ ಒಂಟಿ ತರುಣ ।
ಎಲ್ಲರೂ ಜಾರಿದರು ನಿದ್ರೆಗೆ, ಬಸ್ಸು ಸಾಗಿತು ಬಲು ದೂರ
ನಡುವಲ್ಲಿ ಜಾರಿ ಬಿತ್ತು ನನ್ನ ಹೆಗಲ ಮೇಲೆ ಅವಳ ತಲೆಯ ಭಾರ ।।
ಅವಳಿಗೋ ಅರಿವೇ ಇಲ್ಲದಂತ ಕುಂಭಕರ್ಣನ ನಿದಿರೆ
ನನಗೆ ಸಂಶಯ "ಇವಳು ಏರಿಸಿರುವಳಾ ಎರಡು ಪೆಗ್ಗು ಮದಿರೆ ?"।
ಏನೆ ಇರಲಿ ನಾ ಅಲುಗಾಡದೆ ಕುಳಿತೆ ಗಟ್ಟಿಯಾಗಿ
ಖುಷಿಯಿಂದ ನನ್ನ ಹೆಗಲ ಬಾಡಿಗೆಗೆ ಬಿಟ್ಟೆ ಬಿಟ್ಟಿಯಾಗಿ ।।
ಮೇಲೆ ಇಟ್ಟು ನನ್ನ ಲಗೇಜು ಕುಳಿತೆ ಕಿಟಿಕಿಯ ಪಕ್ಕ
ಒಂದಿಷ್ಟು ಪ್ರಕೃತಿಯ ಸವಿಯುವುದು ನನ್ನ ಲೆಕ್ಕ ।।
ಲೆಕ್ಕಾಚಾರದ ನಡುವೆ ಪ್ರತ್ಯಕ್ಷಳಾದಳು ಒಬ್ಬಳು ಚೆಲುವೆ
ನಾನೋ ಮೊದಲೇ ಗಾಬರಿಯ ಮನುಷ್ಯ
ಯಾವುದೋ ಯೋಚನೆಯಲಿ ನುಡಿದೆ "ಹೌದು ಶಿಷ್ಯ"।।
ಅವಳು ಬೇರೆ ಹುಡುಗಿಯರ ಹಾಗೆ ಕೋಪಗೊಳ್ಳಲಿಲ್ಲ
ಸುಮ್ಮನೆ ಹಾಗೆ ನನ್ನ ಕಡೆ ನೋಡಿ ಗೀರಿದಳು ಹಲ್ಲ ।
ಕಣ್ಣ ಮುಂದಿದ್ದ ಮುಂಗುರಳ ಸರಿಸಿ ಕುಳಿತಳು ನನ್ನ ಬಗಲಿಗೆ
ಯಾರೋ ಕೂಗಿದ ಹಾಗೆ ಭ್ರಮೆ "ಲಡ್ಡೂ ಬಿತ್ತ ನಿನ್ನ ಬಾಯಿಗೆ"।।
ಶುರುವಾಯಿತು ಕೊನೆಗೂ ನಮ್ಮ ಪಯಣ
ಅಕ್ಕಪಕ್ಕದ ಸೀಟಿನಲ್ಲಿ ಒಂಟಿ ತರುಣಿ ಒಂಟಿ ತರುಣ ।
ಎಲ್ಲರೂ ಜಾರಿದರು ನಿದ್ರೆಗೆ, ಬಸ್ಸು ಸಾಗಿತು ಬಲು ದೂರ
ನಡುವಲ್ಲಿ ಜಾರಿ ಬಿತ್ತು ನನ್ನ ಹೆಗಲ ಮೇಲೆ ಅವಳ ತಲೆಯ ಭಾರ ।।
ಅವಳಿಗೋ ಅರಿವೇ ಇಲ್ಲದಂತ ಕುಂಭಕರ್ಣನ ನಿದಿರೆ
ನನಗೆ ಸಂಶಯ "ಇವಳು ಏರಿಸಿರುವಳಾ ಎರಡು ಪೆಗ್ಗು ಮದಿರೆ ?"।
ಏನೆ ಇರಲಿ ನಾ ಅಲುಗಾಡದೆ ಕುಳಿತೆ ಗಟ್ಟಿಯಾಗಿ
ಖುಷಿಯಿಂದ ನನ್ನ ಹೆಗಲ ಬಾಡಿಗೆಗೆ ಬಿಟ್ಟೆ ಬಿಟ್ಟಿಯಾಗಿ ।।
ಅದೆಲ್ಲೋ ಇಳಿದು ಹೋದಳಂತೆ ಚೆಲುವೆ ಅವಳ ಮನೆಯ ಕಡೆಗೆ ।
ಒಂಟಿಯಾದ ಬದುಕಲಿ ಜಂಟಿಯಾಗುವ ಕನಸಿನ ದಾರುಣ ಸಾವು
ನನಗೆ ಉಳಿದಿದ್ದು ತಡೆಯಲಾಗದಷ್ಟು ಭುಜ ನೋವು ।।
------------
ಗುರುರಾಜ್