ಮಾಸದ ಆ ನೆನಪು
ಮಾಸಿದ ಕಣ್ಣೊಳಪು
ಮರೆಯಾದ ಆ ಹುರುಪು
ಕಳೆದೋದ ಜೀವನವೀಗ ಕರಿ ಬಿಳುಪು||
ಖಾಲಿಯಾದ ಕನಸು
ಮೂಲೆ ಗುಂಪಾದ ಮನಸ್ಸು
ಯಾವುದರಲ್ಲೂ ಕಾಣುತ್ತಿಲ್ಲ ಸೊಗಸು
ಏನು ಮಾಡುವುದು ಇದು ವೈರಾಗ್ಯದ ವಯಸ್ಸು||
ಭಗವಂತನೇ ನೀನೆಷ್ಟು ಕ್ರೂರಿ
ಹೆತ್ತ ಮಕ್ಕಳೇ ಆಗಿರುವರಲ್ಲ ನನ್ನ ವೈರಿ
ದಯವಿಟ್ಟು ಕೃಪೆ ತೋರಿ
ತೋರಿಸು ನಿನ್ನ ಮನೆಯ ದಾರಿ||
ಕಾಣುವ ಆಸೆಯಿಲ್ಲ ನಾಳಿನ ಅರುಣೋದಯ
ಇಷ್ಟು ಹೇಳಿದರು ಕೇಳದ ಕಿವುಡನಾದೆಯ
ಏನು ಮಾಡಬೇಕು ಹೇಳು ಕರಗಲು ನಿನ್ನ ಹೃದಯ
ಕ್ಷಮಿಸು ದೇವ ತಪ್ಪಿದ್ದರೆ, ಮಕ್ಕಳೇಳುವಂತೆ ನಾನೊಬ್ಬ ಮುದಿಯ||
--
ಗುರುರಾಜ