ಪುಟಗಳು

ಸೋಮವಾರ, ಸೆಪ್ಟೆಂಬರ್ 17, 2012

ಸಂಧ್ಯಾ ಕಾಲ




ಮಾಸದ ಆ ನೆನಪು
ಮಾಸಿದ ಕಣ್ಣೊಳಪು 
ಮರೆಯಾದ ಆ ಹುರುಪು 
ಕಳೆದೋದ ಜೀವನವೀಗ ಕರಿ ಬಿಳುಪು||

ಖಾಲಿಯಾದ ಕನಸು 
ಮೂಲೆ ಗುಂಪಾದ ಮನಸ್ಸು 
ಯಾವುದರಲ್ಲೂ ಕಾಣುತ್ತಿಲ್ಲ ಸೊಗಸು 
ಏನು ಮಾಡುವುದು ಇದು ವೈರಾಗ್ಯದ ವಯಸ್ಸು||

ಭಗವಂತನೇ ನೀನೆಷ್ಟು ಕ್ರೂರಿ 
ಹೆತ್ತ ಮಕ್ಕಳೇ ಆಗಿರುವರಲ್ಲ ನನ್ನ ವೈರಿ 
ದಯವಿಟ್ಟು ಕೃಪೆ ತೋರಿ 
ತೋರಿಸು ನಿನ್ನ ಮನೆಯ ದಾರಿ||

ಕಾಣುವ ಆಸೆಯಿಲ್ಲ ನಾಳಿನ ಅರುಣೋದಯ 
ಇಷ್ಟು ಹೇಳಿದರು ಕೇಳದ ಕಿವುಡನಾದೆಯ
ಏನು ಮಾಡಬೇಕು ಹೇಳು ಕರಗಲು ನಿನ್ನ ಹೃದಯ
ಕ್ಷಮಿಸು ದೇವ ತಪ್ಪಿದ್ದರೆ, ಮಕ್ಕಳೇಳುವಂತೆ ನಾನೊಬ್ಬ ಮುದಿಯ||

--
ಗುರುರಾಜ