ಪುಟಗಳು

ಬುಧವಾರ, ಆಗಸ್ಟ್ 7, 2019

ಮುಂಗಾರು

ಅಯ್ಯೋ  ಏನು ಮಳೆ
ಏನು ಪ್ರತಾಪ
ಬೇಕಿತ್ತಾ ಈ ಮುಂಗಾರು??

ರೈತನ ಬತ್ತಿದ ಕಂಗಳಲ್ಲಿ
ಹರ್ಷದ ಚಿಲುಮೆ ಚಿಮ್ಮಲು
ಬೇಕಿತ್ತು ಈ ಮುಂಗಾರು।।

ಕವಿಯೊಬ್ಬನ
ಸ್ಫೂರ್ತಿ ಮೊಳಕೆಯೊಡೆಯಲು
ಬೇಕಿತ್ತು ಈ ಮುಂಗಾರು ।।

ನೆರೆಮನೆಯ ಮಗು
ಅಂಗಳದಿ ಆಡುತ್ತ ಜಾರಿ ಬೀಳಲು
ಬೇಕಿತ್ತು ಈ ಮುಂಗಾರು ।।

ಗುಡುಗಿನ ಸದ್ದಿಗೆ
ಅವಳು ನಲ್ಲನ ತೆಕ್ಕೆಗೆ ಬೀಳಲು
ಬೇಕಿತ್ತು ಈ ಮುಂಗಾರು।।

ಅಷ್ಟೇ ಅಲ್ಲ , ಧೂಳಿಡಿದು
ಬೆಳ್ಳಗಾಗಿದ್ದ ಕೊಡೆಯು ಕಪ್ಪಗಾಗಲು
ಬೇಕಿತ್ತು ಈ ಮುಂಗಾರು ।।
---
ಗುರುರಾಜ್ ಎಂ ಜೆ