ಪ್ರೀತಿಯನು ಬೆರೆಸಿ
ಕನಸುಗಳ ಕುಣಿಸಿ
ಬರೆದ ನೆಚ್ಚಿನ ಸಾಲುಗಳಿವು
ಇಂದು ಯಾರದೋ ಪಾಲಾಗಿದೆ ॥
ನೀರನ್ನು ಚಿಮ್ಮಿಸಿ
ಒಣ ಬಟ್ಟೆಯಲಿ ಒರೆಸಿ
ಮಿನುಗಿಸಿದ ಕನ್ನಡಿಯಲಿ
ಇಂದು ಯಾರದೋ ಪ್ರತಿಬಿಂಬವಿದೆ॥
ನನ್ನದೇ ಚಿತ್ರದಲಿ
ನಾ ಬರೆದ ಕಥೆಯಲಿ
ನನ್ನದೇ ಕಲ್ಪನೆಯ ದೃಶ್ಯದಲಿ
ಇಂದು ಯಾರದೋ ಅಭಿನಯವಿದೆ॥
ಹಸಿರು ಬಾಳೆ ಎಲೆ
ಬಾಯೂರಿಸುವ ತುಪ್ಪ
ಮೃಷ್ಟಾನ್ನ ಭೋಜನ
ಇಂದು ಇದು ಮಾತ್ರ ನನ್ನ ಪಾಲಿಗಿದೆ॥
---
ಗುರುರಾಜ