ಪುಟಗಳು

ಭಾನುವಾರ, ಸೆಪ್ಟೆಂಬರ್ 28, 2014

ಬೆಳದಿಂಗಳ ಬಾಲೆ

ಇದೊಂದು ನಾ ಕಂಡ ಒಂದು ಅತ್ಯದ್ಭುತ ಚಿತ್ರ
ನನಗೆ ತುಂಬಾ ಹಿಡಿಸಿದ ಚಿತ್ರ
ಈ ಕವನ ಆ ಚಿತ್ರಕ್ಕೆ ಅರ್ಪಣೆ
ಬೆಳದಿಂಗಳ ಬಾಲೆ (೧೯೯೫)
ನಾಯಕ - ರೇವಂತ (ಅನಂತನಾಗ್ )
ನಾಯಕಿ - ರಮ್ಯ (ಸುಮನ್ ನಗರಕರ್ )
ನಿರ್ದೇಶಕ- ಸುನಿಲ್ ಕುಮಾರ್ ದೇಸಾಯಿ


ಬೆಳದಿಂಗಳ ಬಾಲೆ
-------------------------
ಚದುರಂಗ ಇದೆ ಇವನ ಕಾಯಕ
ಇವನೇ ಈ ಚಿತ್ರದ ನಾಯಕ
ಪ್ರಶಸ್ತಿ ಪುರಸ್ಕಾರ ಇವನ ಮಡಿಲಲಿ ಹಲವಾರು
ಇವನ ಪ್ರತಿಭೆ ಗುರುತಿಸಿದವರು ಮಾತ್ರ  ಕೆಲವರು।।

ಹೀಗೆಯೇ ಕೊರಗಲಿ  ಕುಳಿತವನಿಗೆ ಬಂತೊಂದು ಕರೆ
ಅವನ ಬದುಕಲಿ ಮೂಡಿತು ಹೊಸತೊಂದು ಗೆರೆ
ಮಧುರ ಕಂಠದಲಿ ಕೆಣಕುತ ಇವನ ಮನವ
ಅವಳು ತೋರಿಸಿದಳು ತನ್ನ ಅಭಿಮಾನವ।।

ಒಗಟು ಬೆಸೆಯುವುದೆ ಅವಳ ಜೀವನ
ಅದನು ಬಿಡಿಸುತ ಕೂತನು ಈತ ಅನುದಿನ
ನಡುವೆಯೇ ಬಂದು ಹೋದವು ಅವನಿಗೆ ಕಷ್ಟದ ದಿನಗಳು
ಆಗಲು ಅವನ ಹಿಂದೆ ನಿಂತಳು ಪ್ರತಿ ಕ್ಷಣಗಳು।।

ಹೀಗೆಯೇ  ಕೊನೆಗೊಂದು ದಿನ ಅವಳ ಕಂಡು ಹಿಡಿಯಲು
ಅವಳೇ  ಕೊಟ್ಟ ಒಗಟನು  ಬಿಡಿಸಲು
ತನ್ನ ಬುದ್ಧಿಯೊಂದಿಗೆ ಸ್ನೇಹಿತರ ಸಹಾಯ ಪಡೆದನು
ಕೊನೆಗೂ ಅವಳ್ಯಾರೆಂದು ಕಂಡು ಹಿಡಿದನು।।

ಇದೆ ಖುಷಿಯಲಿ ಅವಳ ನೋಡಲು ಹೊರಟವನ ಕೈಯಲ್ಲಿ
ಅವಳಪ್ಪ ಕೈಗಿಟ್ಟರು ಒಂದು ಪತ್ರ ಆ ಸಂಜೆಯಲಿ
ಆ ಪತ್ರವ ಓದಿದೊಡನೆಯೆ ಕಾಲಡಿಯ ಭೂಮಿ ಕುಸಿಯಿತು
ಆ ಕನಸಿನ ಬೊಂಬೆ ಖಾಯಿಲೆಗೆ ಬಲಿಯಾದಳೆಂದು ತಿಳಿಯಿತು।।

ಇಷ್ಟಾದರೂ ಕೊನೆಗೂ ಅವಳ ಮುಖವ ನೋಡುವುದಿಲ್ಲ ರೇವಂತ
ಹೇಳುತ , ರಮ್ಯ ನನ್ನ ಕಲ್ಪನೆಯಲ್ಲಿ ಇನ್ನೂ  ಜೀವಂತ
ನಾಯಕನ ಜೀವನದಲ್ಲಿ ತೋರಿಸಿದ್ದ ವಿಧಿ ತನ್ನ ಲೀಲೆ
ಮರೆಯಾಗಿಸಿ ಅವನ ಪ್ರೀತಿಯ ಬೆಳದಿಂಗಳ  ಬಾಲೆ ।।
--
ಗುರುರಾಜ  

ಮಂಗಳವಾರ, ಜುಲೈ 15, 2014

ಉಳಿದವರು ಕಂಡಂತೆ


ನಾ ಗೆಲ್ಲುವೆ
ನನ್ನಾಣೆಗೂ ನಾ ಗೆಲ್ಲುವೆ
ಸೋತರೇನಂತೆ ಈ ದಿನ
ಮುಂದೊಂದು ದಿನ ಗೆದ್ದೇ ತೀರುವೆ ।।

ಕನಸುಗಳು ಕೈ ಕೊಟ್ಟರೇನಂತೆ
ಮನಸಿಗೆ ನೋವಾದರೇನಂತೆ
ಸೋತರೇನಂತೆ ಈ ದಿನ
ನನ್ನ ಬದುಕು ಎಲ್ಲರ ಬದುಕಂತೆ ।।

ಸೋಲಿಲ್ಲದ ಜೀವನ
ಸಾವಿಲ್ಲದ ಮನೆಯಂತೆ
ಸೋತರೇನಂತೆ ಈ ದಿನ
ಸೋಲೆಂಬುದು ಸಾಮಾನ್ಯವಂತೆ।।

ಗೆಲುವಿಗೊಂದೆ ನೆಲೆಯಂತೆ
ಸೋಲಿಗಿಲ್ಲಿ ಶೂನ್ಯ ಬೆಲೆಯಂತೆ
ಸೋತರೇನಂತೆ ಈ ದಿನ
ಸೋತು ಗೆಲ್ಲುವುದು ಒಂದು ಕಲೆಯಂತೆ।।

ಗೆದ್ದವನಿಗೆ ಬಂಗಾರದ ತೊಟ್ಟಿಲಂತೆ
ಸೋತವನ ತೆಕ್ಕೆಗೆ ತಾಮ್ರದ ಬಟ್ಟಲಂತೆ
ಸೋತರೇನಂತೆ ಈ ದಿನ
ಸೋಲೇ ಗೆಲುವಿನ ಮೊದಲ ಮೆಟ್ಟಿಲಂತೆ ।।

ಕೊನೆಗೊಂದು ಮಾತು ಹೇಳುವೆ
ನನ್ನಾಣೆಗೂ ನಾ ಗೆದ್ದೇ ಗೆಲ್ಲುವೆ
ಆದರೆ ಗೆಲ್ಲಲಿ ಸೋಲಲಿ ಮುಂದೊಂದು ದಿನ
ನನ್ನ ಬದುಕು ಕೂಡ ಉಳಿದವರು ಕಂಡಂತೆ ।।
--
ಗುರುರಾಜ

ಭಾನುವಾರ, ಮೇ 11, 2014

ಹುಚ್ಚ


ಅಂದು ಅವನೇ ನಾಯಕ ಅವಳೇ ನಾಯಕಿ
ಪ್ರೀತಿಯ ಗೀತೆಯಲ್ಲಿ ಅವನೇ  ಗಾಯಕ ಅವಳೇ ಗಾಯಕಿ
ಎಲ್ಲರ ಮರೆತು ಪ್ರೇಮ ಪಕ್ಷಿಯಂತೆ  ಹಾರಾಡಿದನು
ಪ್ರೇಮದಂಬರವನು  ಅವಳೊಂದಿಗೆ ತಲುಪಿದನು।।

ಏನೋ ಸಂತಸ ಏನೋ ಹರುಷ
ಎಲ್ಲವೂ ತನ್ನದೆನ್ನುವ ಅಹಂ ತೋರಿದ ಪುರುಷ
ಅವನಿಗೋ ಅವನ ಪ್ರೀತಿಯೊಂದೆ ಸ್ವಚ್ಛ
ಆದರವನು ಎಲ್ಲರ ದೃಷ್ಟಿಯಲ್ಲಿ ಅರೆ ಹುಚ್ಚ ।।

ಇಂದು ಅದೇಕೋ ಕೆದರಿಕೊಂಡ ತಲೆ
ಮೈ ಕೈ ಕೆರೆಯುತ ಆಕಾಶದೆಡೆಗೆ ನೋಡುವುದೇ ಕಲೆ
ಒಬ್ಬನೇ ನಗುವನು ಒಬ್ಬನೇ ಅಳುವನು
ಸಿಕ್ಕ ಸಿಕ್ಕವರನೆಲ್ಲ ಕರೆದು ಬೈಯ್ಯುವನು ।।

ಯಾವುದೋ ಒಂದು ಅನುಮಾನ ಮೂಡಿಸಿತು ಮನಸ್ತಾಪ
ಅವನ ಜೀವನ ತೊರೆದು ನಡೆದೇ ಬಿಟ್ಟಳು ಪಾಪ
ಅವಳ ಹರಿದ ಚಿತ್ರವ ನೋಡುತ ಹರಿಸುತ ಕಂಬನಿ ಗುಚ್ಛ
 ಆಗಿರುವನು ಅವನು ಇಂದು ಪೂರ್ತಿ ಹುಚ್ಚ।।

----------
ಗುರುರಾಜ