ಸಿಹಿ ನಿದಿರೆಯಲಿ ಜಾರಿದಾಗ
ಬಂದಿತೊಂದು ಕರೆ
ಸಿಹಿಯಾದ ಆ ಧನಿಯ ಕೇಳಿದಾಗ
ಎದ್ದು ಕುಳಿತೆ ಖರೆ॥
ಪದಗಳವು ಜೇನಿನಂತೆ
ಕಿವಿಯೊಳಗೆ ಇಳಿಯುತಿರಲು ಹಾಗೆ
ಸತ್ತ ಹೃದಯವಿದು
ಏಕೋ ಕುಣಿಯುತಿದೆ ಹೀಗೆ ॥
ಅಕ್ಷರಗಳ ಜೋಡಣೆಯಲಿ
ಅವಳದೇ ವಿಭಿನ್ನತೆ
ಮಾತುಗಳ ಮಧ್ಯದಲಿ
ಮುಗುಳ್ನಗೆಯ ಮುಗ್ದತೆ ॥
ಯಾವ ಜನ್ಮದ ಅದೃಷ್ಟವೋ
ಕರಣಕೆ ಇಂದು
ತನ್ನ ಪಾಪವನೆಲ್ಲ ತೊಳೆದ ಹಾಗೆ
ಗಂಗೆಯಲಿ ಮಿಂದು॥
ಕರೆ ಮಾಡಿದ ಉದ್ದೇಶವದು
ಮಾರಲು ನನಗೆ ಸಾಲದ ಚೀಟಿ
ಏನು ಮಾಡಲಿ ನಾನು ಕಾಸಿಲ್ಲ
ಬೇಡವೆಂದೆ ಹೃದಯವನು ಚಿವುಟಿ॥
--
ಗುರುರಾಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ